ನಾಡಹಬ್ಬಕ್ಕೆ ‘೨೪ಕ್ಯಾರೆಟ್
Posted date: 03 Thu, Oct 2013 – 03:40:44 PM

ಅಪ್ಪು ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೌಡರೆಡ್ಡಿ(ಬಾಗೇಪಲ್ಲಿ) ಅವರು ನಿರ್ಮಿಸುತ್ತಿರುವ ‘೨೪ ಕ್ಯಾರೆಟ್‘ ಎಂಬ ನೂತನ ಚಿತ್ರದ ಚಿತ್ರೀಕರಣ ನಾಡಹಬ್ಬ ದಸರದ ಶುಭ ಸಂದರ್ಭದಲ್ಲಿ ಆರಂಭವಾಗಲಿದೆ.
    ‘ತುಂಬಿದ ಮನೆ‘ ಸೇರಿದಂತೆ ಹಿಂದೆ ಸಾಕಷ್ಟು ಯಶಸ್ವಿ ಚತ್ರಗಳನ್ನು ನಿರ್ದೇಶಿಸಿರುವ ಎಸ್.ಉಮೇಶ್ ಈ ಚಿತ್ರದ ನಿರ್ದೇಶಕರು. ಉಮೇಶ್ ಅವರು ವಿಜಯ ಚಂಡೂರ್ ಅವರೊಟ್ಟಿಗೆ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ದೀಪು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ನಂಜುಂಡಿನಾಗರಾಜ್, ಸುರೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎಂ.ಕೃಷ್ಣಪ್ಪ.
  ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ ‘೨೪ ಕ್ಯಾರೆಟ್‘ ಸಿನಿಮಾ ಹಲವು ನೂತನ ಹಾಗೂ ವಿಶೇಷಗಳ ಸಾಗರ. ರಿಶಿಕುಮಾರ ಸ್ವಾಮೀಜಿ ಈ ಚಿತ್ರಕ್ಕೆ ಹಾಡೊಂದು ಬರೆದು ವಿಶೇಷ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಅವರ ಮಗಳು ಲಿಖಿತ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಹಸ ನಿರ್ದೇಶಕ ನಂಜುಂಡಿ ನಾಗರಾಜ್ ಅವರ ಪುತ್ರ ಧನಂಜಯ್ ಖಳನಾಯಕನ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷ.
   ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ತೀರ್ಥಹಳ್ಳಿ, ಜೋಗ್ ಮುಂತಾದ ಕಡೆ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ರಂಗಾಯಣರಘು, ಶೋಭ್‌ರಾಜ್, ಮಂಗಳೂರು ಸುರೇಶ್, ಸುಧಾಬೆಳವಾಡಿ, ಪೆಟ್ರೋಲ್ ಪ್ರಸನ್ನ, ಕೃಷ್ಣಕುಮಾರ್, ಲಕ್ಷ್ಮಣ್, ಡಿ.ಬಿ.ಬಸವೇಗೌಡ, ಶ್ರೀಕವನ, ತೇಜಸ್ವಿನಿ, ಚೆನ್ನಪಟ್ಟಣ ಶ್ರೀನಿವಾಸ್, ರಾಕ್‌ಸತೀಶ್, ದೀಪು, ಜಿ.ಎಸ್.ಬಸವರಾಜ್, ಪದ್ಮನಾಭನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed